ಕವಿಗೋಷ್ಠಿಯಲ್ಲಿ….

ಢಣಢಣ ಗಂಟೆ ಬಾರಿಸಿತು
ಎಲ್ಲರೂ ಸಾಲಾಗಿ ಕುಳಿತರು
ಬಣ್ಣ ಬಣ್ಣದ ಕವಿತೆಗಳು
ಒಂದೊಂದಾಗಿ ವೇದಿಕೆಗೆ ಬಂದವು.

ಕೆಲವು ಕವಿತೆಗಳು
ಹೂಗಳಂತೆ ಅರಳಿದರೆ
ಮತ್ತೆ ಕೆಲವು
ನದಿಗಳಂತೆ ಹರಿದವು.

ಕೆಲವು ಕವಿತೆಗಳು
ನಕ್ಷತ್ರಗಳಂತೆ ಮಿನುಗಿದರೆ
ಮತ್ತೆ ಕೆಲವು
ಉಲ್ಕೆಗಳಂತೆ ಉರಿದು
ಬೂದಿಯಾದವು.

ಕೆಲವು ಕವಿತೆಗಳು
ಕಲ್ಲುಸಕ್ಕರೆ ತಿನ್ನಿಸಿದರೆ
ಮತ್ತೆ ಕೆಲವು
ಕಷಾಯ ಕುಡಿಸಿದವು.

ಕೆಲವು ಕವಿತೆಗಳು
ಬೆಂಕಿ ಉಗುಳಿದರೆ
ಮತ್ತೆ ಕೆಲವು
ರಕ್ತ ಕಾರಿದವು.
ಕೆಲವು ಕವಿತೆಗಳು
ಬಿಕ್ಕಳಿಸಿ ಅತ್ತರೆ
ಮತ್ತೆ ಕೆಲವು
ಮುಕ್ಕಳಿಸಿ ನಕ್ಕವು

ಕೆಲವು ಕವಿತೆಗಳು
ತೊಂಡು ದನಗಳಂತೆ
ಕಂಡದ್ದನ್ನೆಲ್ಲ ಹೊಸಕಿಹಾಕಿದರೆ
ಮತ್ತೆ ಕೆಲವು ತಾಯಿಯಂತೆ
ಅವನ್ನೆತ್ತಿಕೊಂಡು ಸಂತೈಸಿದವು.

ಕೊನೆಗೆ ಬಂದದ್ದು
ಪ್ರೇಮಿಯಂತಹ ಕವಿತೆ
ನೆಲ ನೀರು ಆಕಾಶದಂತ ಕವಿತೆ
ಅದು ಕಡಲಿನ ಹಾಗೆ ಮೊರೆಯುತ್ತಿತ್ತು
ನೆಲದ ಹಾಗೆ ಪರಿಮಳಿಸುತ್ತಿತ್ತು.
ಅದು ಆಕಾಶದಂತೆ
ಎಲ್ಲವನ್ನೂ ತಬ್ಬಿಕೊಂಡು
ಮೈ ಮರೆಯಿತು, ಮೈ ಮರೆಸಿತು.

(ಕವಿಗೋಷ್ಠಿಯೊಂದರಲ್ಲಿ ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಯನ್ನು ಕೇಳಿ)


Previous post ವಿನಯ
Next post ಜೀರುಂಡೆ ಸಾಲು

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

cheap jordans|wholesale air max|wholesale jordans|wholesale jewelry|wholesale jerseys